Tuesday, July 24, 2012

ಚಿಂತನೆಯ ಹಾದಿ


   ಚಿಂತನೆಯ ಹಾದಿ
ಯಾರು ಒಲ್ಲರೆಂದು
ಬಾಳ ಬೆಲ್ಲ ಸವೇದೀತೆ
ಯಾರು ಸಲ್ಲರೆಂದು
ಹೃದಯ ಬಡಿತ  ನಿಂತೀತೆ
ಯಾರು ಬಣ್ಣಿಸಲಿಲ್ಲವೆಂದು
ಹೂ ನಗುವ ಮರೆತೀತೆ
ಯಾರು ಕಾಣಲಿಲ್ಲವೆಂದು
ರಮಣಿಯ ಸೌಂದರ್ಯದ
ಪ್ರಕೃತಿ ನಿಂತೀತೆ
ಕುಣಿದು ಕುಣಿದು ಕುಪ್ಪಳಿಸಿದರು
ತಲ್ಲಣಿಸಿದೆ ಪೃಥ್ವಿ ತನ್ನ ಸುತ್ತನ್ನು 
ನೀಲ್ಲಿಸೀತೆ
ಯಾರು ನೆತ್ತಿ ಸುಟ್ಟು ಹಿಡಿ ಶಾಪ
ಹಾಕಿದರೆಂದು ಸೂರ್ಯ ತನ್ನ
ಕಿರಣ ನಿಲ್ಲಿಸೀತೆ
ಯಾರೊ ಕತ್ತಲಲ್ಲಿ ಬಿಕ್ಕಿ ಬಿಕ್ಕಿ
ಆಳುತಿಹನು ಎಂದು ಚಂದ್ರ ತನ್ನ
ಚೆಲುವನ್ನು ಮರೆತೀತೆ
ಮಣ್ಣ ಕಾಯುವವನು ನಾನು
ಅದನ್ನೆ ತುಳಿದು ನಡೆದರು
ಮಣ್ಣು ನನ್ನ ತೊರೆದೀತೆ

~ ಸಂಜು ~

No comments:

Post a Comment