Thursday, February 16, 2012

ಮದುವಣಗಿತ್ತಿ


ಕಳೆಯಿತೆ ನಿನ್ನ ಅಟ್ಟಹಾಸ
ಬರಿದು ಆಯಿತೇ ನಿನ್ನ ಬತ್ತಳಿಕೆ
ಮೆರೆದು ನಿಂತೇ ಕೊನೆಗೂ
ಮದುವಣಗಿತ್ತಿಯೆ ಮೆರುಗು

ಎಂಥ ಸಾಧನೆ ನಿನ್ನೊಡಲಿಗೆ
ಅಂಗಿ ಆರಿಶಿನದ ಕಲೆಗೆ
ಬಿಟ್ಟು ಕೊಟ್ಟೆ ನಿನ್ನ ಅರ್ಧ ಹಾಗೆ
ಗಿಟ್ಟಿಸಿ ಕೊಂಡ ಕನಸಿನಾಂಗೆ 

ಒಂದೊತ್ತಿನ ಊಟ ಸಾಕು ನನಗೆ
ಕಳಿಸಬೆಡೀ ದೊರದ ಊರಿಗೆ
ನಿನ್ನ ಈ ಆರ್ತನಾದ ಕೇಳಲಾಗದೆ 
ಕಂಬನಿಯ ಸಾಗರನಿಗೆ ಸೇರಿಸುತ್ತಿದ್ದೆ ನೇಸರ
ಕಾಣಲಾರನೆಂದು .....ಅವಿತಿದ್ದ ಚಂದಿರ

ತವರ ಮಣ್ಣ ಋಣ ತೀರಿತೆಂದು
ಬಂಡಿ ನಡೆದಿದೆ ದಾರಿ ನೂಕುತ  ಮುಂದು .....
ಮನದ ಅಳಲು ಕೂಗಿ ... ಕರೆದು
ಹಡೆದವರ ಕಣ್ಣ ಒರೆಸಿರಿ ಭಂದು
ನನ್ನ ಪ್ರೀತಿ ಋಣಾ ತೀರಿಸಿರಿ... ಎಂದು
 

           ~ಸಂಜು~

No comments:

Post a Comment